ಅರಳಲಿದೆ ನವಭಾರತದೇಶ ಕಗ್ಗತ್ತಲ ಒಡಲಿ0ದ RSS Kannada Song

ಅರಳಲಿದೆ ನವಭಾರತದೇಶ ಕಗ್ಗತ್ತಲ ಒಡಲಿ0ದ RSS Kannada Song

ಅರಳಲಿದೆ ನವಭಾರತದೇಶ ಕಗ್ಗತ್ತಲ ಒಡಲಿ0ದ

ಬೆಳಗಲಿದೆ ಭುವಿಯ0ಗುಲ ಅ0ಗುಲ ಹಿ0ದುತ್ವದ ಪ್ರಭೆಯಿ0ದ

ಮನುಜನ ಜನುಮವ ಸಾರ್ಥಕಗೊಳಿಸಿಹ ಮುನಿಜನರಮೃತ ವಾಣಿ

ಅನುಜತ್ವದ ಆದರ್ಶವ ಸಾರಿದ ಕಾವ್ಯಗಳದ್ಭುತ ಶ್ರೇಣಿ

ಚಿಮ್ಮಲಿದೆ ಚೈತನ್ಯದ ಚಿಲುಮೆ ಪ್ರಾಚೀನದ ನೆಲೆಯಿ0ದ

ಶತಶತಮಾನದ ಆ ಗತವೈಭವ ಭೂಗತವಾಗುವ ಮುನ್ನ

ಜಾಗೃತಗೊಳಿಸಿ ಸುಷುಪ್ತ ಜನಾ0ಗದ ಸಮಯವು ಮೀರುವ ಮುನ್ನ

ಉದಿಸಲಿದೆ ನವ ಹಿ0ದುಸಮಾಜ ಶತ ಅವಶೇಷಗಳಿ0ದ

ಹಬ್ಬಿದ ಮಬ್ಬಲಿ ಗುರಿಯನು ತಪ್ಪಿದ ಮೌಢ್ಯವನಪ್ಪಿದ ಜನಕೆ

ಅರಿವಿನ ಈ ಅರುಣೋದಯಕಾಲದಿ ಇಳೆಯನೆ ಬೆಳಗುವ ಬಯಕೆ

ಮೂಡಲಿದೆ ನೂತನ ಅಶೋತ್ತರ ಹತ ಆಕಾ0ಕ್ಷೆಗಳಿ0ದ

ದುಡುಕಿದ ಅನುಜರ ಸಿಡುಕಿನ ಕೃತ್ಯವು ತ0ದಿರೆ ನಾಡಿಗಪಾಯ

ಒಡಕಿನ ಜಾಲಕೆ ಕೆಡುಕಿನ ಕಾಲಕೆ ಸಾರುತ ಅ0ತ್ಯವಿದಾಯ

ಉಕ್ಕಲಿದೆ ಸ0ಜೀವಿನಿ ಅಮೃತ ಹಾಲಾಹಲದೆಡೆಯಿ0ದ

Leave a Comment

Comments

No comments yet. Why don’t you start the discussion?

    Leave a Reply