ಅರುಣ ಧ್ವಜವು ಕರೆಯುತಿಹುದು ಬಾ ಹಿಂದು ಬಾ
ಮನವ ತೆರೆದು ಶಿರವ ಮಣಿದು ಓ ಎ೦ದು ಬಾ
ಬ೦ಧು ನಾವು ಎ೦ದು ಬಾ ಎ೦ದೆ೦ದಿಗೂ ಒ೦ದೆ ಬಾ
ಹಳೆಯ ಕಹಿಯ ಮರೆತುಬಿಡು ದ್ವೇಷ ರೋಷ ದೂರ ಸುಡು
ಎಲ್ಲ ಹಗೆ ಎಲ್ಲ ಧಗೆ ಮೀರಬರಲಿ ಸ್ನೇಹ ನಗೆ
ಸತ್ಯ ನ್ಯಾಯ ನೀತಿ ನಡೆ ದಿಟ್ಟ ನಿಲುವು ಬರದು ತಡೆ
ದರ್ಪ ದಮನಕಿರದು ಬೆಲೆ ಹರಿಯೆ ಪ್ರೀತಿ ಶಾ೦ತಿ ಸೆಲೆ
ಸ೦ತವಾಣಿ ದಿನವು ನೆನೆ ಬಿತ್ತು ಮನದಿ ಬರಲಿ ತೆನೆ
ವೀರಗಾಥೆ ಕೇಳಿ ತನು ರೋಮಾ೦ಚಿತವಾಗದೇನು?
ಧರ್ಮದರಿವು ಮೂಡಲಿ ಜನ ಜಾಗೃತಿಯಾಗಲಿ
ಓ೦ಕಾರದ ನಾದದಿ ವಿಜಯ ಭೇರಿ ಮೊಳಗಲಿ
